Thursday, January 20, 2011

Update :ಲವಲVKಯಿಂದ ಶಾಕ್!

ಕಳೆದ 8-10 ತಿಂಗಳ ಹಿಂದಿನ ಮಾತು, ವಿಜಯ ಕರ್ನಾಟಕದವರು ನನ್ನ ಬ್ಲಾಗಿನ ಫೋಟೋವನ್ನ ಗೊತ್ತಿಲ್ಲದೆ ( ಅಂದರೆ ಅಂತರ್ ಜಾಲದಿಂದ ಕದ್ದು ) ಪ್ರಕಟಿಸಿ, ನಂತರ ತಪ್ಪು ಅಂತ ಒಪ್ಪಿಕೊಂಡು ( ವಿವರಗಳಿಗೆ ನನ್ನ ಬ್ಲಾಗನ ಹಿಂದಿನ ಪೋಸ್ಟ್ ನೋಡಿ, ಅಥವಾ ಇಲ್ಲಿ ಕ್ಲಿಕ್ಕಿಸಿ ) ಜೊತೆಗೆ ಗೌರವ ಧನ ಕಳಿಸುತ್ತೇನೆ ಅಂತ ಆಗಿನ ಉಪಸಂಪಾದಕರು ರೈಲು ಬಿಟ್ಟಿದ್ದರು.ನಾನು ಒಂದೆರಡು ಮಾತಾಡಿ ಸರಿ, ಅಡ್ಡಿಲ್ಲ ಅಂತ ಗೊಣು ಅಲ್ಲಾಡಿಸಿದ್ದೆ.

2-3 ತಿಂಗಳಾದರೂ ಗೌರವಧನವು ಇಲ್ಲ, ಏನೂ ಇಲ್ಲ.ಜೊತೆಗೆ ಒಂದೆರಡು ಇ-ಮೇಲ್ ಮಾಡಿದ್ದೆ, ನಿರುತ್ತರ.ಸರಿ ದೊಡ್ಡ ಸಂಸ್ಥೆ, ನಂ.1 ಪತ್ರಿಕೆ, ಪ್ರೊಸೆಸ್ಸಿಂಗ್ ಟೈಮ್ ಜಾಸ್ತಿ ಇರಬಹುದು ಅಂತ ಹೇಳಿ ಮತ್ತೆ ಸುಮ್ಮನಾದೆ.

ಮತ್ತೆ 2-3 ತಿಂಗಳಾದರೂ ಗೌರವಧನ ಇಲ್ಲ.ನಂತರ ನೆನಪಾಗಿ ಕಾನೂನು ಕ್ರಮ ಜರುಗಿಸುತ್ತೇನೆ ಅಂತ ಹೇಳೋಣ ಹೇಳಿ ದೂರವಾಣಿ ಮೂಲಕ ಸಂಪರ್ಕಿಸಿದೆ.ಅ ಕಡೆಯಿಂದ ಯಾವೊಂದು ಉತ್ತರವಿರಲಿಲ್ಲ.ಯಾರು ನಂಬುತ್ತಿರೋ ಬಿಡುತ್ತಿರೋ ಅದೇ ದಿನವೆ ವಿಜಯ ಕರ್ನಾಟಕದ ರಾಜೀನಾಮೆ ಪ್ರಹಸನ ನಡೆದದ್ದು.ಸಂಪಾದಕರೊಂದೆ ಅಲ್ಲ, ಜೊತೆಗೆ ಉಪಸಂಪಾದಕರು ಸೇರಿ 3-4 ವಿಕೆಟ ಬಿದ್ದಿವೆ ಅಂತ ಗೊತ್ತಾಗಿದ್ದು.

ಆಗಿನ ಉಪಸಂಪಾದಕರು ವಿಜಯ ಕರ್ನಾಟಕ ಬಿಟ್ಟರು , ಜೊತೆಗೆ ನನ್ನ ಗೌರವ ಧನವು 3x ಗೋವಿಂದ...ಆಗಿನ ಉಪಸಂಪಾದಕರು ಯಾರಿದ್ದರು ಅಂತ ವಿವರವಾಗಿ ಹೇಳಬೇಕಾಗಿಲ್ಲ.ವಿಜಯ ಕರ್ನಾಟಕದಿಂದ ಹೊರಬಂದಮೇಲೆ ಬ್ಲಾಗ್ ಬರಿತಾ ಇದಾರೆ... ಗೊತ್ತಾಯ್ತಲ್ಲ...?

ಈಗಾಗಲೇ ಈ ವಿಷಯ ಹಳೆಯದಾದ್ದರಿಂದ ಕಾನೂನು ಕ್ರಮದ ಬಗ್ಗೆ ಕೈಬಿಟ್ಟಿದ್ದೇನೆ.ಇದೆಲ್ಲ ಶ್ರೀಶಂರ ಹಣವೂ ಇಲ್ಲ ಗುಣವೂ ಇಲ್ಲ ಓದಿದ ಮೇಲೆ ನೆನಪಾಯಿತು.

(ಮಾಜಿ) ಉಪಸಂಪಾದಕರಿಗೆ,
ಆಗ ಉತ್ತರಿಸಲಾಗದ ಇ-ಮೇಲ್ ಗೆ ಈಗಲಾದರೂ ಉತ್ತರ ಸಿಕ್ಕಿತೆ ? ಯಾಕೆಂದರೆ ಈಗ ಸ್ವಲ್ಪ ಬಿಡುವಿದೆಯೆಲ್ಲ!

No comments: