Showing posts with label News. Show all posts
Showing posts with label News. Show all posts

Thursday, January 20, 2011

Update :ಲವಲVKಯಿಂದ ಶಾಕ್!

ಕಳೆದ 8-10 ತಿಂಗಳ ಹಿಂದಿನ ಮಾತು, ವಿಜಯ ಕರ್ನಾಟಕದವರು ನನ್ನ ಬ್ಲಾಗಿನ ಫೋಟೋವನ್ನ ಗೊತ್ತಿಲ್ಲದೆ ( ಅಂದರೆ ಅಂತರ್ ಜಾಲದಿಂದ ಕದ್ದು ) ಪ್ರಕಟಿಸಿ, ನಂತರ ತಪ್ಪು ಅಂತ ಒಪ್ಪಿಕೊಂಡು ( ವಿವರಗಳಿಗೆ ನನ್ನ ಬ್ಲಾಗನ ಹಿಂದಿನ ಪೋಸ್ಟ್ ನೋಡಿ, ಅಥವಾ ಇಲ್ಲಿ ಕ್ಲಿಕ್ಕಿಸಿ ) ಜೊತೆಗೆ ಗೌರವ ಧನ ಕಳಿಸುತ್ತೇನೆ ಅಂತ ಆಗಿನ ಉಪಸಂಪಾದಕರು ರೈಲು ಬಿಟ್ಟಿದ್ದರು.ನಾನು ಒಂದೆರಡು ಮಾತಾಡಿ ಸರಿ, ಅಡ್ಡಿಲ್ಲ ಅಂತ ಗೊಣು ಅಲ್ಲಾಡಿಸಿದ್ದೆ.

2-3 ತಿಂಗಳಾದರೂ ಗೌರವಧನವು ಇಲ್ಲ, ಏನೂ ಇಲ್ಲ.ಜೊತೆಗೆ ಒಂದೆರಡು ಇ-ಮೇಲ್ ಮಾಡಿದ್ದೆ, ನಿರುತ್ತರ.ಸರಿ ದೊಡ್ಡ ಸಂಸ್ಥೆ, ನಂ.1 ಪತ್ರಿಕೆ, ಪ್ರೊಸೆಸ್ಸಿಂಗ್ ಟೈಮ್ ಜಾಸ್ತಿ ಇರಬಹುದು ಅಂತ ಹೇಳಿ ಮತ್ತೆ ಸುಮ್ಮನಾದೆ.

ಮತ್ತೆ 2-3 ತಿಂಗಳಾದರೂ ಗೌರವಧನ ಇಲ್ಲ.ನಂತರ ನೆನಪಾಗಿ ಕಾನೂನು ಕ್ರಮ ಜರುಗಿಸುತ್ತೇನೆ ಅಂತ ಹೇಳೋಣ ಹೇಳಿ ದೂರವಾಣಿ ಮೂಲಕ ಸಂಪರ್ಕಿಸಿದೆ.ಅ ಕಡೆಯಿಂದ ಯಾವೊಂದು ಉತ್ತರವಿರಲಿಲ್ಲ.ಯಾರು ನಂಬುತ್ತಿರೋ ಬಿಡುತ್ತಿರೋ ಅದೇ ದಿನವೆ ವಿಜಯ ಕರ್ನಾಟಕದ ರಾಜೀನಾಮೆ ಪ್ರಹಸನ ನಡೆದದ್ದು.ಸಂಪಾದಕರೊಂದೆ ಅಲ್ಲ, ಜೊತೆಗೆ ಉಪಸಂಪಾದಕರು ಸೇರಿ 3-4 ವಿಕೆಟ ಬಿದ್ದಿವೆ ಅಂತ ಗೊತ್ತಾಗಿದ್ದು.

ಆಗಿನ ಉಪಸಂಪಾದಕರು ವಿಜಯ ಕರ್ನಾಟಕ ಬಿಟ್ಟರು , ಜೊತೆಗೆ ನನ್ನ ಗೌರವ ಧನವು 3x ಗೋವಿಂದ...ಆಗಿನ ಉಪಸಂಪಾದಕರು ಯಾರಿದ್ದರು ಅಂತ ವಿವರವಾಗಿ ಹೇಳಬೇಕಾಗಿಲ್ಲ.ವಿಜಯ ಕರ್ನಾಟಕದಿಂದ ಹೊರಬಂದಮೇಲೆ ಬ್ಲಾಗ್ ಬರಿತಾ ಇದಾರೆ... ಗೊತ್ತಾಯ್ತಲ್ಲ...?

ಈಗಾಗಲೇ ಈ ವಿಷಯ ಹಳೆಯದಾದ್ದರಿಂದ ಕಾನೂನು ಕ್ರಮದ ಬಗ್ಗೆ ಕೈಬಿಟ್ಟಿದ್ದೇನೆ.ಇದೆಲ್ಲ ಶ್ರೀಶಂರ ಹಣವೂ ಇಲ್ಲ ಗುಣವೂ ಇಲ್ಲ ಓದಿದ ಮೇಲೆ ನೆನಪಾಯಿತು.

(ಮಾಜಿ) ಉಪಸಂಪಾದಕರಿಗೆ,
ಆಗ ಉತ್ತರಿಸಲಾಗದ ಇ-ಮೇಲ್ ಗೆ ಈಗಲಾದರೂ ಉತ್ತರ ಸಿಕ್ಕಿತೆ ? ಯಾಕೆಂದರೆ ಈಗ ಸ್ವಲ್ಪ ಬಿಡುವಿದೆಯೆಲ್ಲ!

Sunday, May 23, 2010

ಲವಲVKಯಿಂದ ಶಾಕ್!

17 ಮೇ 2010

ಮೊದಲೇ ಶಿರಸಿ - ಬೆಂಗಳೂರು ಬಸ್ಸ್ ತಲುಪುವುದು ತಡವಾಗಿತ್ತು.ಪ್ರಯಾಣದ ಆಯಾಸ ಮತ್ತು ನಿದ್ರೆಯ ಗುಂಗಿನಲ್ಲಿದ್ದೆ.ಆಫೀಸಿಗೆ ಹೋಗುವ ಆಳು ಲೆಕ್ಕ ಬಾಕಿ ಇತ್ತು.ಅಂತು ಮನೆ ತಲುಪಿದ್ದೆ.

ಆಲ್ಲೆ ಇದ್ದ ದಿನ ಪತ್ರಿಕೆ "ವಿಜಯ ಕರ್ನಾಟಕ"ದ ಪುಟಗಳನ್ನ ಮಗುಚಿದೆ, ಜೊತೆಗೆ "ಲವಲVK"ಯ ಪುಟಗಳನ್ನೂ.ಮೊದಲ ಪುಟದಲ್ಲಿ ಹಲಸಿನ ಲೇಖನ ... ಮುಂದಿನ ಪುಟಗಳನ್ನು ನೋಡುತ್ತಾ ಹೊದೆ.ನಿದ್ರೆಯ ಗುಂಗಿನಲ್ಲಿದ್ದ ನನಗೆ ಶಾಕ್ ಆಗಿತ್ತು!!!.ಮತ್ತೆ ಮತ್ತೆ ಅದೆ ಪುಟದ ಕೋಕಂ (Cocum) ಚಿತ್ರಗಳನ್ನ ನೋಡಿದೆ.ಸಂಶಯವಿರಲಿಲ್ಲ ಇದು ನಾನು ತೆಗೆದ ಫೋಟೋನೆ.


"ವಿಜಯ ಕರ್ನಾಟಕ" ಇ-ಪೇಪರ್ 17 ಮೇ 2010 | ಪುಟ-5 ಮತ್ತು ಲೇಖನ

ಇದಕ್ಕು ಮೊದಲು ಕೋಕಂ ಚಿತ್ರ ಸಹಿತ ಲೇಖನವನ್ನ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ.ಚಿತ್ರಗಳನ್ನ ಕ್ರಾಪ್ ಮತ್ತು ಗ್ರಾಫಿಕ್ಸನಲ್ಲಿ ತಿದ್ದಲಾಗಿತ್ತು.ಚಿತ್ರದ ಬಗ್ಗೆ ನಮೂದಿಸಿದ್ದರಾ ನೋಡಿದೆ. ಇಲ್ಲಾ!? ನಾನು ಈ ಚಿತ್ರಗಳನ್ನು ಬ್ಲಾಗ್ ನಲ್ಲಿ ಬಿಟ್ಟರೆ ಬೇರೆಲ್ಲೂ ಕಳುಹಿಸಿರಲಿಲ್ಲ ಅಥವಾ ಅನುಮತಿಯನ್ನೂ ಕೊಟ್ಟಿರಲಿಲ್ಲ.ಒಂದು ಕಡೆ ಫೋಟೊ ಪ್ರಕಟಗೊಂಡಿದ್ದಕ್ಕೆ ಖುಷಿ ಇದ್ದರೆ ಇನ್ನೊಂದು ಕಡೆ ಫೋಟೊ ಅನುಮತಿ ಇಲ್ಲದೆ ಪ್ರಕಟಿಸಿದ್ದರ ಬಗ್ಗೆ ಖೇದವಿತ್ತು.

ದೂರವಾಣಿ ಮತ್ತು ಲಿಖಿತವಾಗಿ ದೂರು ನೀಡುವುದೆಂದು ತೀರ್ಮಾನಿಸಿ ಸಂಜೆ ಆಫೀಸಿನಿಂದ ಬರುವ ಹೊತ್ತಿಗೆ ಎಲ್ಲ ಮುಗಿಸಿದೆ.ನಂತರ ಲವಲVKಯ ಸಂಪಾಕರು, ಆಗಿರುವ ಲೋಪವನ್ನು ಒಪ್ಪಿ ಮುಂದಿನ ದಿನದ ಪ್ರತಿಯಲ್ಲಿ ಪ್ರಕಟಿಸುತ್ತೆವೆಂದು ಹೇಳಿ ಪ್ರಕಟಿಸಿದ್ದಾರೆ.


"ವಿಜಯ ಕರ್ನಾಟಕ" ಇ-ಪೇಪರ್ 18 ಮೇ 2010 | ಪುಟ-4 ಮತ್ತು ಲೇಖನ

ಒಟ್ಟಿನಲ್ಲಿ "ಲವಲVKಯಿಂದ ಶಾಕ್!" ಪ್ರಕರಣ ಸುಖಾಂತ್ಯ ಕಂಡಿದೆ.

ಕೊನೆಯ ಮಾತು : ಯುವ ಬರಹಗಾರರು ಯಾವುದೇ ಚಿತ್ರಗಳನ್ನ ಅಂತರಜಾಲ (Internet) ನಿಂದ ಪಡೆಯುವುದ್ದಿದ್ದಲ್ಲಿ ಹಕ್ಕುದಾರರ ಪೂರ್ವ ಅನುಮತಿ ಪಡೆದರೆ, ಅವರ ಶ್ರಮಕ್ಕೆ ಒಂದು ಗೌವರವ ಮತ್ತು ಕಾನೂನು ರೀತಿಯಿಂದಲು ಉತ್ತಮ.

ಚಿತ್ರಗಳನ್ನು "ವಿಜಯ ಕರ್ನಾಟಕ" ಇ-ಪೇಪರ್ ನಿಂದ ಪಡೆಯಲಾಗಿದೆ.